ಗೋಕಾಕ ಹಾಗು ಮೂಡಲಗಿ ವಲಯದ 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಗರದ ಸತೀಶ ಶುಗರ್ಸ ಅಕ್ಯಾಡೆಮಿ ಪಿ.ಯು ಕಾಲೇಜನಲ್ಲಿ *ಸತೀಶ ಸ್ಪಂದನ* ಹೆಸರಿನ ಒಂದು ದಿನದ ಪರೀಕ್ಷಾ-ಕಾರ್ಯಾಗಾರ ಹಮ್ಮಿಕೊಂಡಿದ್ದರು.
ಕಾಲೇಜಿನ ಟ್ರಸ್ಟಿಗಳಾದ ವಿ.ಆರ್.ಪರಸನ್ನವರ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಮಯದಲ್ಲಿ SSLC ವಿದ್ಯಾರ್ಥಿಗಳಿಗಾಗಿ ತಯಾರಿಸಿದ ವಿಶೇಷ ಕೈಪಿಡಿ ಬಿಡುಗಡೆ ಮಾಡಿ, ವಿದ್ಯಾರ್ಥಿಗಳಿಗೆ ವಿತರಿಸಿದರು.
ಈ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಬಿ ಬಳಿಗಾರ ಹಾಗು ಅಜಿತ ಮನ್ನಿಕೇರಿ ಯವರು ಅತಿಥಿಗಳಾಗಿ ಆಗಮಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ಪ್ರಕಾಶ ಲಕ್ಷೆಟ್ಟಿ, ಉಪಪ್ರಾಚಾರ್ಯರಾದ ಎಸ್.ಎಸ್ ಮೆಣಸಗಿ ಮತ್ತು ಮಹೇಶ ಚಿಕ್ಕೊಡೆ,ಬಿ.ಹೆಚ್.ಸ್ವಾಮಿ ಯವರು ಉಪಸ್ಥಿತರಿದ್ದರು.