ಯಮಕನಮರಡಿ ಮತಕ್ಷೇತ್ರದ ಧರನಟ್ಟಿ ಗ್ರಾಮ ಪಂಚಾಯಿತಿ ಒಂದನೇ ವಾರ್ಡ್ ನಿಂದ ಶ್ರೀ ಬಾಳೇಶ ನಿಂಗಪ್ಪ ದಾಸನಟ್ಟಿಯವರು ಭರ್ಜರಿ ಜಯಗಳಿಸಿದ್ದಾರೆ.
ಶಾಸಕ ಸತೀಶ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಯಾಗಿರುವ ಬಾಳೇಶ್ 361 ಮತಗಳ ಪಡೆಯುವ ಮೂಲಕ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.
ಧರನಟ್ಟಿ ಪಂಚಾಯಿತಿಗೆ ಇವರ ತಂದೆ, ತಾಯಿ ಸೇರಿ ಒಟ್ಟು ಒಂದೇ ಕುಟುಂಬದ ಮೂರು 10 ಬಾರಿ ಸದಸ್ಯರಾಗಿ ಆಯ್ಕೆಯಾದ್ದರು ಇಲ್ಲಿ ಸ್ಮರಿಸಬಹುದು.
ವಿಜಯೋತ್ಸವ:
ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬೆನ್ನಲ್ಲೇ ಮಾನವ ಬಂಧುತ್ವ ವೇದಿಕೆ ಕರ್ನಾಟಕ ರಾಜ್ಯ ಸಂಚಾಲಕರಾದ ಶ್ರೀ ರವೀಂದ್ರ ನಾಯ್ಕರ ಸರ್ ಅವರು ಮತ್ತು ಬೆಂಬಲಿಗರು ಸಿಹಿ ಹಂಚಿ, ಗುಲಾಲು ಹಾರಿಸಿ ಸಂಭ್ರಮಿಸಿದರು.ಸಂಜಯ ನಾಯ್ಕ, ಪರುಶುರಾಮ ಪೂಜೇರಿ, ಸಿದ್ರಾಯಿ ದನದವರ , ಅಪ್ಪಯ್ಯ ಗುಜನಾಳ, ಬಸವಂತಪ್ಪ ಪತೆನಿ, ಅಡಿವೆಪ್ಪ ಮಾಳಗಿ ರಮೆಶ ದನದವರ. ಪ್ರಶಾಂತ ಬಂಬನವರ ಇನಿತರು ಇದ್ದರು.
