ಮೂಡಲಗಿ : ನಾಗನೂರ ಪಟ್ಟಣದಲ್ಲಿ ಮನ್ನಿಕೇರಿ ಪೆಟ್ರೋಲಿಯಂದಲ್ಲಿ ಗ್ರಾಹಕರಿಗೆ ಬಂಪರ್ ಬಹುಮಾನ ಸಿಕ್ಕಿದೆ ಇಲ್ಲಿ ಪೆಟ್ರೋಲ್ ಹಾಕಿಸಿದ ಏಳು ಗ್ರಾಹಕರಿಗೆ ಬಹುಮಾನ ಪಡೆದ್ದು ಕಾರ್ಯಕ್ರಮವನ್ನು ಯುವ ನಾಯಕಿ ಪ್ರೀಯಾಂಕ ಜಾರಕಿಹೊಳಿ ಹಾಗೂ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಉದ್ಘಾಟಿಸಿದರು.

ಗ್ರಾಹಕರಿಗೆ ಒಂದು ಕಾರು, ಬೈಕ್, ಸೈಕಲ್, ಫ್ರೀಜ್ ಮಿಕ್ಸರ್ ಸೇರಿದಂತೆ ಇನ್ನೂ ಅನೇಕ ಆಕರ್ಷಕ ಬಹುಮಾನಗಳನ್ನು ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಮಾತನಾಡಿ ಗ್ರಾಹಕರಿಗೆ ಅಭಿನಂದಿಸಿ ಉದ್ಯೋಗದಲ್ಲಿ ವಿಶ್ವಾಸ ಬಹುಮುಖ್ಯ ವಾಗಿರುತ್ತದೆ. ಆ ವಿಶ್ವಾಸವನ್ನು ಮನ್ನಿಕೇರಿ ಪೆಟ್ರೋಲಿಯಂ ಗಳಿಸಿದೆ ಹೀಗೆ ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.
ನಂತರ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಮಾತನಾಡಿ ಗ್ರಾಹಕರ ಎಂದರೇ ಕಿಂಗ್ ಇದ್ದ ಹಾಗೆ ಉದ್ಯೋಗಗಳನ್ನು ಬೆಳೆಸಲು ಗ್ರಾಹಕರ ಪಾತ್ರ ಮುಖ್ಯವಾಗಿರುತ್ತದೆ ಎಂದು ಮನ್ನಿಕೇರಿ ಪೆಟ್ರೋಲಿಯಂಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಜಯಂತಕುಮಾರ್ ಉಮಾಕಾಂತ, ಬಸನಗೌಡ ಪಾಟೀಲ್, ವಿ ಮುರಳಿ, ಗೌರವ ಕುಮಾರ್, ಮನ್ನಿಕೇರಿ ಪೆಟ್ರೋಲಿಯಂ ಮಾಲಿಕರಾದ ಪಾಂಡು ಮನ್ನಿಕೇರಿ, ಸತೀಶ್ ಮನ್ನಿಕೇರಿ ಹಾಗೂ ಅನೇಕರು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA