ಗೋಕಾಕ ತಾಲೂಕಿನ ಗುಜನಾಳ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ದನ – ಕರುಗಳಲ್ಲಿ ಉಲ್ಬಣಗೊಂಡಿರುವ ಅಂಟುರೋಗ ಕುರಿತು ರೈತರಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಗೂ ಜಾನುವಾರುಗಳಿಗೆ ಆರೋಗ್ಯ ವರ್ಧಕ ಔಷಧಿ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ರಮೇಶ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಭೀಮನಗೌಡ ಪೋಲೀಸಗೌಡರ ಅವರು ಭಾಗವಹಿಸಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉಚಿತ ಆರೋಗ್ಯವರ್ಧಕ ಔಷಧಿ ವಿತರಿಸಿದರು , ಈ ಸಂದರ್ಭದಲ್ಲಿ ಪಶು ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ . ಮೋಹನ ಕಮತ , ಅಂಕಲಗಿ ಪಶು ವೈದ್ಯಾಧಿಕಾರಿಗಳಾದ ಸೈಯ್ಯದ ಸನದಿ ಸೇರಿದಂತೆ ಜನ ಪ್ರತಿನಿಧಿಗಳು , ಸ್ಥಳೀಯ ಮುಖಂಡರು , ಹಿರಿಯರು ಉಪಸ್ಥಿತರಿದ್ದರು .
CKNEWSKANNADA / BRASTACHARDARSHAN CK NEWS KANNADA