
ಗೋಕಾಕ : 2020-21 ರ ರಾಜ್ಯ ಬಜೆಟ್ನಲ್ಲಿ ಕೆ.ಎಮ್.ಎಫ್ ನ ಅಧ್ಯಕ್ಷರು ಹಾಗೂ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಯವರ ಪ್ರಯತ್ನದಿಂದ ರಾಜ್ಯದ ವಿವಿಧ ಜಿಲ್ಲೆಗಳ ಧಾರ್ಮಿಕ ಸಂಸ್ಥೆಗಳ ಮೂಲ ಸೌಕರ್ಯ ಅಭಿವೃದ್ಧಿಯ ಅನುದಾನದಲ್ಲಿ ಗೋಕಾಕ ನಗರದ ಹೊರ ವಲಯದಲ್ಲಿ ಕರ್ನಾಟಕ ಹಿಂದೂ ಕ್ಷತ್ರೀಯ ಸಂಘದ ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನದ ಭೂಮಿ ಪೂಜೆಯನ್ನು ಯುವ ನಾಯಕರುಗಳಾದ ರಾಹುಲ್ ಜಾರಕಿಹೊಳಿ ಸರ್ವೋತ್ತಮ ಜಾರಕಿಹೊಳಿ ಮತ್ತು ಶಾಸಕರ ಆಪ್ತ ಸಹಾಯಕರಾದ ದಾಸಪ್ಪ ನಾಯಿಕ ನೆರವೆರಿಸಿದರು .

ಈ ಸಂದರ್ಭದಲ್ಲಿ ಕ್ಷತ್ರೀಯ ಸಮಾಜದ ಹಿರಿಯರಾದ ರಾಮನಗೌಡ ಪಾಟೀಲ್ , ವಾಯ್.ಚಿ.ನಾಯಿಕ , ಬಿ.ಎಸ್.ದಂಡನಾಯಕ , ಜಿ.ಎಸ್.ನಾಯ್ಕ , ಕೆ.ಎಚ್.ಕುಲಗೋಡ , ಎಂ.ಡಿ.ಹುಲಿಮನಿ ದ್ಯಾಮಣ್ಣಾ ಏಣಗಿ , ವಾಯ್.ಐ.ಪಾಟೀಲ್ , ಶ್ರೀಮತಿ ಲಾವಣ್ಯಾ ಶಿಲ್ಲೆದಾರ , ಆನಂದರಾವ್ ನಾಯಕ್ , ಸಿ.ಎಲ್.ನಾಯಕ ಸೇರಿದಂತೆ ಅಖಂಡ ಬೆಳಗಾವಿ ಜಿಲ್ಲೆಯ ಹಿಂದೂ ಕತೀಯ ಸಮಾಜದ ಮುಖಂಡರು ಉಪಸ್ಥಿತರಿದ್ದರು .
CKNEWSKANNADA / BRASTACHARDARSHAN CK NEWS KANNADA