ಗೋಕಾಕ: ಬಹಳ ದಿನಗಳ ನಂತರ ಲೇದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಪಟ್ಟಣದಲ್ಲಿ ಹಮ್ಮಿಕೊಂಡಿದ್ದರಿಂದ ಕ್ರೀಡಾ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು.

ಪಟ್ಟಣದಲ್ಲಿ ಹಮ್ಮಿಕೊಂಡಿದ್ದ GPL-20 ಪ್ರೀಮಿಯರ್ ಲೀಗ್ ಕ್ರಿಕೆಟ್ ನ ಫೈನಲ್ ಪಂದ್ಯವನ್ನು ವೀಕ್ಷಿಸಿ, ಶುಭ ಹಾರೈಸಿ ಮಾತನಾಡಿದ ಅವರು, ಕ್ರೀಡಾ ಅಭಿಮಾನಿಗಳು ಈ ಲೇದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ನೋಡಿ ಖುಷಿ ಪಟ್ಟಿದ್ದು, ಇನ್ನೊಮ್ಮೆ ಲೇದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗುವುದು ಎಂದರು.
ಮೇ 1ರಿಂದ ಆರಂಭವಾದ ಪಂದ್ಯಾವಳಿಗಳು ಕಳೆದ 9 ದಿನಗಳು ನಡೆದು ಇವತ್ತಿಗೆ ಮುಕ್ತಾಯವಾದ್ದು, ಸಾರ್ವಜನಿಕರಿಂದ ಮತ್ತು ಕ್ರಿಡಾಪಟುಗಳಿಂದ ಭಾರೀ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.
ಈ ಪಂದ್ಯಾವಳಿಯಲ್ಲಿ “ಬೆಳಗಾವಿ”ತಂಡ ಪ್ರಥಮ ಸ್ಥಾನ ಪಡೆದಿದ್ದು, ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ 50,000 ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ವಿತರಿಸಲಾಯಿತು. ದ್ವಿತೀಯ ಬಹುಮಾನ ಪಡೆದ ಗೋಕಾಕ್ ತಂಡಕ್ಕೆ 30,000 ಸಾವಿರ ನಗದು ಬಹುಮಾನ ಮತ್ತು ಟ್ರೋಫಿಯನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಸದಸ್ಯರಾದ ಜುಬರ್ ಮಿರ್ಜಾಬಾಯಿ, ಮಾರುತಿ ಗುಟಗುದ್ದಿ, ಗುತ್ತಿಗೆದಾರ್ ಕಿರಣ್ ಇಟ್ನಾಳ್, ಉದ್ಯಮಿದಾರ್ ಮೋಹನ್ ಶೆಟ್ಟಿ, ಮಹಾಂತೇಶ್ ತಾವಶಿ, ಸತೀಶ್ ಅಕ್ವಾ ಮಾಲೀಕರಾದ ಭರತ್ ದ್ಯಾಮಣ್ಣವರ, ಇಮ್ರಾನ್ ತಪಕೀರ ಹಾಗೂ ಗೋಕಾಕ್ ಕ್ರಿಕೆಟ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA