Breaking News

Daily Archives: ಫೆಬ್ರವರಿ 1, 2021

*ಸರ್ವ ವ್ಯಾಪಿ ಮತ್ತು ಸರ್ವ ಸ್ಪರ್ಶಿ ಬಜೆಟ್ – ಜನಪರ ಬಜೆಟ್ ಸ್ವಾಗತಿಸಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌*

ಕೋವಿಡ್ ನಿಂದಾಗಿ ಉಂಟಾದ ಭಾರಿ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಯಾವುದೇ ತೆರಿಗೆ‌ ವಿಧಿಸದೇ ಉದ್ಯಮ ಸ್ನೇಹಿ ಬಜೆಟ್ ನ್ನು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು‌ ನೀಡಿದ್ದು ಇದು ಸರ್ವ ವ್ಯಾಪಿ ಮತ್ತು ಸರ್ವ ಸ್ಪರ್ಶಿಯಾಗಿದೆ ಎಂದು ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ. ಕೇಂದ್ರ ಬಜೆಟ್ ನ್ನು ಸ್ವಾಗತಿಸಿ ಮಾತನಾಡಿದ ಅವರು, ದೇಶಾದ್ಯಂತ 15,000 ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ. …

Read More »

ಆರ್ಥಿಕತೆಗೆ ಚೈತನ್ಯ ತುಂಬಲು ಬಜೆಟ್ ಸಹಕಾರಿ, ಜನಹಿತದ ಬಜೆಟ್ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

ಗೋಕಾಕ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತ ಪಡಿಸಿದ್ದು, ಸಮಾಜದ ಪ್ರತಿಯೊಬ್ಬರಿಗೂ ಈ ಬಜೆಟ್ ಸಹಕಾರಿಯಾಗಿದೆ ಎಂದು ಶ್ಲಾಘಿಸಿದ್ದಾರೆ. ಕೃಷಿ ಹಾಗೂ ರೈತರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ರೈತರ ಅಭಿವೃದ್ಧಿ ಅದು ಕೇಂದ್ರದಿಂದ ಮಾತ್ರ ಸಾಧ್ಯವಿದ್ದು, ಎಲ್ಲ ನಾಗರೀಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಜನಪರ ಹಾಗೂ ರೈತಪರ ಬಜೆಟ್ ಇದಾಗಿದೆ ಎಂದು ಅವರು ಹೇಳಿದ್ದಾರೆ. ಆರ್ಥಿಕತೆಗೆ …

Read More »

*ಕೌಜಲಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರ ಆಯ್ಕೆ*

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಆಶೀರ್ವಾದದಿಂದ ಕೌಜಲಗಿ ಬ್ಲಾಕ್ ಕಾಂಗ್ರೆಸ್ ಘಟಕದ ಘಟಕದ ಅಧ್ಯಕ್ಷರಾಗಿ ಮಂಜುನಾಥ ಮಸಗುಪ್ಪಿ ಅವರು ನೇಮಕ. ಮಂಜುನಾಥ ಮಸಗುಪ್ಪಿ ಮಾತನಾಡಿ “ನಾನು ಅತ್ಯಂತ ಅಚ್ಚುಕಟ್ಟಾಗಿ ಪಕ್ಷನಿಷ್ಠೆಯಿಂದ ಕಾರ್ಯ ಮಾಡುತ್ತೇನೆ, ಪಕ್ಷ ಸಂಘಟನೆ ಮಾಡುತ್ತೇನೆ. ಎಂದು ಹೇಳಿದರು. ಈ ಸಂದರ್ಭದಲ್ಲಿ ವಿನಾಯಕ ಪೂಜಾರಿ, ಹಣಮಂತಗೌಡ ಚಿಕ್ಕೆಗೌಡ್ರು, ಭೀಮಶಿ ಕಾರಡಗಿ, ಸಂಜು ಬಾಗಿ, ಪರಶು ಸೂರ್ಯವಂಶಿ , ಗುರುರಾಜ ತಿಮ್ಮಾಪೂರ, ಮುತ್ತು ಕೌಜಲಗಿ ,ಉಮೇಶ್ ಚಿಪ್ಪಲಕಟ್ಟಿ, ಮಾದೇವ …

Read More »

*ಪುಟ್ಟ ಸಾಹುಕಾರರ ಹುಟ್ಟು ಹಬ್ಬ, ಮಾನವೀಯತೆ ಮೇರೆದ ಸಂತೋಷ ಜಾರಕಿಹೊಳಿ ಕುಟುಂಬ*

ಗೋಕಾಕ: ಇವತ್ತು ಸಾಹುಕಾರರ ಕುಟುಂಬದಲ್ಲಿ ಮತ್ತೊಂದು ಖುಷಿಯ ದಿನ ಇದೆ ದಿನ ಒಂದು ವರ್ಷದ ಹಿಂದೆ ಶ್ರೀ ಸಂತೋಷ್ ಜಾರಕಿಹೊಳಿ ದಂಪತಿಗಳು ಒಂದು ಗಂಡು ಮಗುವಿಗೆ ಜನ್ಮ ನೀಡಿದ ವಿಶೇಷ ದಿನ ಹುಟ್ಟಿನಿಂದಲೂ ಸರಳತೆಯನ್ನು ಮೆರೆದು ಬಂದ ಸಾಹುಕಾರರ ಕುಟುಂಬ ಮಗುವಿನ ಹೆರಿಗೆಯನ್ನು ಸರ್ಕಾರಿ ದವಾಖಾನೆಯಲ್ಲಿ ಮಾಡಿ ಒಂದು ಮಾದರಿಯಾಗಿತ್ತು ಇಂದು ಆ ಪ್ರೀತಿಯ ಕಂದಮ್ಮನಿಗೆ ಮೊದಲನೇ ವರ್ಷ ತುಂಬಿದ ದಿನ ಇಂದು ಕೂಡ ಒಂದು ಸಾಮಾಜಿಕ ಕಳಕಳಿಯನ್ನು ಹೊತ್ತು …

Read More »

ಗೋಕಾಕ ಬ್ಲಾಕ್ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆ

ಗೋಕಾಕ: ಗೋಕಾಕ ಬ್ಲಾಕ್ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಕೊಣ್ಣೂರಿನ ರಾಹುಲ್ ಬಡೇಸಗೋಳ  ಆಯ್ಕೆಯಾಗಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಆದೇಶದ ಮೇರೆಗೆ ಇವರನ್ನು ನೇಮಿಸಲಾಗಿದೆ. ಕಾರ್ಯಕರ್ತರಾದ ಪಾಂಡು ಮನ್ನಿಕೇರಿ, ವಿವೇಕ ಜತ್ತಿ, ಪ್ರಕಾಶ್ ಡಾಂಗೆ, ಅಜ್ಜಪ್ಪ ಕರನಿಂಗ, ಪ್ರವೀಣ್ ಗುಡ್ಡಾಕಾಯು, ಮಂಜುಳಾ ರಾಮಗಾನಟ್ಟಿ, ಇಮ್ರಾನ್ ತಕ್ಕೀರ್, ಹನುಮಂತ ಗೋಪಾಳೆ, ಸುನೀಲ ಗುಡ್ಡಾಕಾಯು, ಶಿವು ಕಿಲಾರಿ, ನಿಯಾಲ ಹುಲಿಕಟ್ಟ, ಬಾಬಾಜಾನ್, ಶ್ರೀಶೈಲ್ ಅವರ ಸಹಕಾರದಿಂದ ಅಧ್ಯಕ್ಷ ಸ್ಥಾನವನ್ನು ಪಡೆದಿದ್ದಾರೆ.

Read More »